Home State Politics National More
STATE NEWS

Bengaluru Business Corridor ಬಗ್ಗೆ ಇಲ್ಲಸಲ್ಲದ ವದಂತಿ; ರೈತರಿಗೇ ಇದರಿಂದ ಲಾಭ ಎಂದ ಅತೀಖ್!

Img 8584.jpg
Posted By: StateNews Desk
Updated on: Nov 2, 2025 | 12:11 PM

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಳ್ಳುತ್ತಿರುವ ಬೆಂಗಳೂರು ಬ್ಯುಸಿನೆಸ್ ಕಾರಿಡರ್/ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆ ಕುರಿತು ರೈತ ಸಮುದಾಯದಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗೆ ಬಿಬಿಸಿ ಯೋಜನೆಯ ವಿಶೇಷ ಉದ್ದೇಶಿತ ವಾಹಕದ (SPV) ಅಧ್ಯಕ್ಷರಾದ ಎಲ್‌ಕೆ ಅತೀಖ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಬಿಡಿಎ ಭೂಮಿ ಉಳಿಸಿಕೊಳ್ಳುತ್ತಿದೆ ಎಂಬುದು ಸುಳ್ಳು: ಬಿಡಿಎಯು ಸ್ವಾಧೀನಪಡಿಸಿಕೊಂಡಿರುವ ಒಟ್ಟು ಭೂಮಿಯ 16% ಅನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದೆ ಎಂಬ ಮಾತುಗಳು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಎಲ್‌ಕೆ ಅತೀಕ್ ಅವರು ಖಂಡಿಸಿದ್ದಾರೆ. ಬಿಡಿಎ ಯಾವುದೇ ರಿಯಲ್ ಎಸ್ಟೇಟ್ ಅನ್ನು ಉಳಿಸಿಕೊಳ್ಳುತ್ತಿಲ್ಲ, ಬದಲಿಗೆ ಹೆಚ್ಚುವರಿ ಜಮೀನನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಯೋಜನೆಯ ಭೂಮಿ ವಿಭಜನೆ ವಿವರ:

  • ರಸ್ತೆ ಬಳಕೆ (RoW): ರಸ್ತೆಗೆ 65 ಮೀಟರ್ ರೈಟ್ ಆಫ್ ವೇ (RoW) ಮೀಸಲಾಗಿದ್ದು, ಉಳಿದ 35 ಮೀಟರ್ ವಾಣಿಜ್ಯ ಮತ್ತು ಮಿಶ್ರ ಭೂ ಬಳಕೆಗೆ ಉದ್ದೇಶಿಸಲಾಗಿದೆ.
  • ಉಳಿದ ಭೂಮಿ: 100 ಮೀಟರ್ ಅಗಲದ ಕಾರಿಡಾರ್‌ನಲ್ಲಿ ಇಂಟರ್‌ಚೇಂಜ್‌ಗಳು ಮತ್ತು ಪ್ರವೇಶ/ನಿರ್ಗಮನ ಪ್ರದೇಶಗಳ ಅಗತ್ಯದಿಂದಾಗಿ, ಒಟ್ಟು ಸ್ವಾಧೀನಗೊಂಡ 1810 ಎಕರೆಗಳಲ್ಲಿ ಕೇವಲ 400 ಎಕರೆ (ಶೇ. 22%) ಮಾತ್ರ ವಾಣಿಜ್ಯ ಬಳಕೆಗಾಗಿ ಉಳಿಯಲಿದೆ.
  • ರೈತರಿಗೆ ಪರಿಹಾರ: ಈ ಉಳಿದ 400 ಎಕರೆಗಳಿಂದ ಪಾರ್ಕ್ ಮತ್ತು ಸಿಎ (CA) ಸೈಟ್‌ಗಳ ಅಗತ್ಯಗಳನ್ನು ಕಡಿತಗೊಳಿಸಿದ ನಂತರ, ಉಳಿದ ಸಂಪೂರ್ಣ ಜಾಗವನ್ನು ರೈತರಿಗೆ ಪರಿಹಾರ ಸೈಟ್‌ಗಳಾಗಿ ನೀಡಲಾಗುತ್ತದೆ.
  • ಹೆಚ್ಚುವರಿ ಸ್ವಾಧೀನ: ಹೆಚ್ಚುವರಿ 600 ಎಕರೆಗಳನ್ನು ಸಂಪರ್ಕ ರಸ್ತೆಗಳು ಮತ್ತು ಜಂಕ್ಷನ್‌ಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಇದು ಸಂಪೂರ್ಣವಾಗಿ ರಸ್ತೆ ಬಳಕೆಗೇ ಮೀಸಲಾಗುತ್ತದೆ.

ಒಟ್ಟು ಸ್ವಾಧೀನದಲ್ಲಿ ರೈತರಿಗೆ ಪರಿಹಾರ ಸೈಟ್‌ಗಳಾಗಿ ಮೀಸಲಿರುವುದು ಸುಮಾರು 16.6% ಆಗುತ್ತದೆ ಮತ್ತು ಬಿಡಿಎ ತನ್ನ ವಶದಲ್ಲಿ ಯಾವುದೇ ಹೆಚ್ಚುವರಿ ಭೂಮಿಯನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಅತೀಕ್ ಅವರು ಸ್ಪಷ್ಟಪಡಿಸಿದ್ದಾರೆ.

Shorts Shorts