Home State Politics National More
STATE NEWS

ನವೆಂಬರ್ ಕ್ರಾಂತಿ’ಗೆ CM ಸಿದ್ದರಾಮಯ್ಯ ಕ್ಯಾಂಪ್‌ನಿಂದ ‘First Dose’!?

CM siddharamaiah giving first dose to November kra
Posted By: Sagaradventure
Updated on: Nov 6, 2025 | 4:43 AM

ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ‘ನವೆಂಬರ್ ಕ್ರಾಂತಿ’ಯ ಸದ್ದು ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಬಣದಿಂದಲೇ ಈ ಸಂಚಲನ ಶುರುವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಈ ಹೊಸ ರಾಜಕೀಯ ಸಮೀಕರಣಕ್ಕೆ ನಾಳೆ(ನ.7) ‘ಫಸ್ಟ್‌ ಡೋಸ್‌’ ನೀಡಲು ಸಿದ್ದರಾಮಯ್ಯ ಕ್ಯಾಂಪ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

​ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ರಾಜಣ್ಣ ಅವರ ನಿವಾಸದಲ್ಲಿ ಔತಣ ಕೂಟ ಆಯೋಜಿಸಲಾಗಿದೆ. ಮೇಲ್ನೋಟಕ್ಕೆ ಇದು ಕೇವಲ ಸೌಹಾರ್ದಯುತ ಭೋಜನಕೂಟದಂತೆ ಕಂಡರೂ, ರಾಜಕೀಯ ವಲಯದಲ್ಲಿ ಈ ಭೇಟಿಯು ತೀವ್ರ ಕುತೂಹಲ ಮತ್ತು ಸಂಚಲನಕ್ಕೆ ಕಾರಣವಾಗಿದೆ. ತುಮಕೂರು ಮಟ್ಟಿಗೆ ಸೀಮಿತವಾಗದ ಈ ಸಭೆಯು ದೊಡ್ಡ ಮಟ್ಟದ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎನ್ನಲಾಗಿದೆ.

ಇನ್ನು ​ಮೂಲಗಳ ಪ್ರಕಾರ, ಈ ಭೋಜನಕೂಟ ಕೇವಲ ಊಟಕ್ಕೆ ಸೀಮಿತವಾದದ್ದಲ್ಲ. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಬಲ ಸಂದೇಶ ರವಾನಿಸುವ ಮತ್ತು ರಾಜ್ಯ ಘಟಕದಲ್ಲಿ ಆಂತರಿಕ ಸಮೀಕರಣಗಳನ್ನು ಬದಲಾಯಿಸುವ ಮೊದಲ ಹಂತದ ಯೋಜನೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ‘ತುಮಕೂರು ಡಿನ್ನರ್ ಮೀಟಿಂಗ್’ ಮೂಲಕ ಯಾರಿಗಾದರೂ ‘ದೊಡ್ಡ ಸಂದೇಶ’ ಹೋಗಲಿದೆಯೇ ಅಥವಾ ಕೆಲವು ನಾಯಕರಿಗೆ ‘ಬಿಗ್ ಶಾಕ್’ ಎದುರಾಗಲಿದೆಯೇ ಎಂಬ ಚರ್ಚೆಗಳು ತೀವ್ರಗೊಂಡಿವೆ. ದೆಹಲಿ ಮಟ್ಟದ ‘ಆಟ’ಕ್ಕಾಗಿ ರೂಪಿಸಲಾದ ಮೊದಲ ರಣತಂತ್ರ ಸಭೆ ಇದಾಗಿದೆ ಎನ್ನುವ ಅಭಿಪ್ರಾಯ ರಾಜಕೀಯ ಪಡಸಾಲೆಯಲ್ಲಿ ವ್ಯಕ್ತವಾಗಿದೆ.

Shorts Shorts