Home State Politics National More
STATE NEWS

Mekedatu Project | ಕರ್ನಾಟಕಕ್ಕೆ ಭಾರಿ ಗೆಲುವು: ತಮಿಳುನಾಡು ಅರ್ಜಿ ಅಪ್ರಸ್ತುತ ಎಂದ ಸುಪ್ರೀಂ ಕೋರ್ಟ್!

Mekedatu Project
Posted By: Meghana Gowda
Updated on: Nov 13, 2025 | 8:21 AM

ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು (Tamil Nadu) ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court)  ವಜಾಗೊಳಿಸಿದೆ. ಈ ತೀರ್ಪಿನಿಂದಾಗಿ ಕರ್ನಾಟಕ (Karnataka)ಕ್ಕೆ ದೊಡ್ಡ ಜಯ ಲಭಿಸಿದಂತಾಗಿದೆ.

ಮೇಕೆದಾಟು ಅಣೆಕಟ್ಟು (Mekedatu Project) ವಿರೋಧಿಸಿ ಮತ್ತು ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ವಿವರವಾದ ಯೋಜನಾ ವರದಿ (Detailed Project Report ) ಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಮಿಳುನಾಡಿನ ಅರ್ಜಿಯು ಅಪ್ರಸ್ತುತ (irrelevant) ಎಂದು ಅಭಿಪ್ರಾಯಪಟ್ಟು ಅದನ್ನು ವಜಾಗೊಳಿಸಿತು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಮುಂದಿನ ಕ್ರಮಗಳಿಗೆ ಕಾನೂನಾತ್ಮಕ ದಾರಿಯನ್ನು ಸುಗಮಗೊಳಿಸಿದಂತಾಗಿದೆ.

Shorts Shorts