ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಹಾಗೂ ‘ಕೊತ್ತಲವಾಡಿ’ (Kothalavadi) ಸಿನಿಮಾದ ನಿರ್ಮಾಪಕಿ ಪುಷ್ಪ (Pushpa) ಅವರು, ಚಿತ್ರದ ಪ್ರಚಾರದ ಹೆಸರಿನಲ್ಲಿ ವಂಚನೆ ಹಾಗೂ ಡಿ-ಪ್ರಮೋಟ್ ಆರೋಪದ ಮೇಲೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿಆರ್ಒ (Public Relations Officer) ಹರೀಶ್ ಅರಸು ಸೇರಿದಂತೆ ಐವರು ‘ಕೊತ್ತಲವಾಡಿ’ ಚಿತ್ರವನ್ನು ಪ್ರಚಾರ ಮಾಡಲು ಒಟ್ಟು ₹64 ಲಕ್ಷ ರೂಪಾಯಿ (₹64 lakh ) ಪಡೆದಿದ್ದರು. ಹಣ ಪಡೆದ ನಂತರ ಅವರು ಚಿತ್ರದ ಪ್ರಚಾರ ಮಾಡಿಲ್ಲ. ಬದಲಿಗೆ, ಚಿತ್ರವನ್ನು ಡಿ-ಪ್ರಮೋಟ್ (de-promotionಮಾಡಿದ್ದಾರೆ ಎಂದು ಯಶ್ ತಾಯಿ ಆರೋಪಿಸಿದ್ದಾರೆ.
ಹರೀಶ್ ಅರಸು ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮನೆ ಬಳಿ ಬಂದು ಗಲಾಟೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪಿಆರ್ಒ ಹರೀಶ್ ಅರಸು( Harish Arasu), ಮನು, ನಿತಿನ್, ಮಹೇಶ್ ಗುರು ಮತ್ತು ಸ್ವರ್ಣ ಲತಾ ಎಂಬುವವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.






