Home State Politics National More
STATE NEWS

ತೇಜಸ್ವಿ ಪ್ರತಿಷ್ಠಾನಕ್ಕೆ ಡಾ.ಪ್ರದೀಪ್ ಅಧ್ಯಕ್ಷ, ದೀಪಾ ಹಿರೇಗುತ್ತಿ ಸೇರಿ ನಾಲ್ವರಿಗೆ ಸದಸ್ಯ ಸ್ಥಾನ

Dr. Pradeep, President, Deepa Hiregutty, and four
Posted By: Sagaradventure
Updated on: Nov 20, 2025 | 5:01 AM

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಶ್ರೀ ಕೆ.ವಿ.ಪ್ರಭಾಕರ ಜೇಮ್ಸ್ ತೆರೇಸಾ ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ಸರ್ಕಾರವು ಹೊಸ ಸಮಿತಿಯನ್ನು ರಚಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಅಧಿಸೂಚನೆಯನ್ನು ಹೊರಡಿಸಿದೆ.

​ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು: ​ಸಾಹಿತಿ ಹಾಗೂ ವಿಜ್ಞಾನಿಗಳಾದ ಮೂಡಿಗೆರೆಯ ಡಾ. ಪ್ರದೀಪ್ ಕೆಂಜಿಗೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪರಿಸರ ಚಿಂತಕರಾದ ಆರ್. ರಾಘವೇಂದ್ರ, ಕೊಪ್ಪ ಮೂಲದ ಸಾಹಿತಿಗಳಾದ ದೀಪಾ ಹಿರೇಗುತ್ತಿ, ಬರಹಗಾರರಾದ ರುದ್ರಸ್ವಾಮಿ ಮತ್ತು ಸಾಹಿತಿ ರವೀಶ ಬಸಪ್ಪ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

​ಸಮಿತಿಯ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹಲವು ಉನ್ನತ ಅಧಿಕಾರಿಗಳನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಇಲ್ಲಿನ ಸಹಾಯಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ನೇಮಕಾತಿಯು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

Shorts Shorts