Home State Politics National More
STATE NEWS

ಸಿಎಂ ಕುರ್ಚಿ ಕದನ | ಒಪ್ಪಂದದಂತೆ ನನಗೆ ಸಿಎಂ ಸ್ಥಾನ ಕೊಡಿ ಎಂದ DCM

Kharge dkshi
Posted By: Meghana Gowda
Updated on: Nov 25, 2025 | 7:06 AM

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ (D.K. Shivakumar) ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರ ಮುಂದೆ ಸಿಎಂ ಗಾದಿಗಾಗಿ ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದಾರೆ.

ಡಿಕೆಶಿ ಅವರು ಖರ್ಗೆಯವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದು, “ಎರಡೂವರೆ ವರ್ಷಗಳ ಅವಧಿ ಮುಗಿದಿದೆ. ಒಪ್ಪಂದದ ಪ್ರಕಾರ ತನಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಕೊಡಬೇಕು. ಈ ಕುರಿತು ಎಐಸಿಸಿ ಅಧ್ಯಕ್ಷರು ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಚರ್ಚಿಸಿ ತಮಗೆ ಅವಕಾಶ ಮಾಡಿಕೊಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಐದಾರು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡದೆ ಡಿಕೆಶಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಖರ್ಗೆ ಅವರು ದೆಹಲಿಗೆ ಹೊರಡುವುದಕ್ಕೂ ಮೊದಲು, ದಿಢೀರನೆ ಅವರನ್ನು ಭೇಟಿಯಾಗಿ, ಕಾರಿನಿಂದ ಇಳಿದ ಬಳಿಕ ಪ್ರತ್ಯೇಕವಾಗಿ ಈ ಕುರಿತು ಚರ್ಚೆ ನಡೆಸಿದ್ದಾರೆ.

ಡಿಕೆಶಿ ಅವರ ಈ ದಿಢೀರ್ ಭೇಟಿ ಮತ್ತು ಸಿಎಂ ಗಾದಿಗಾಗಿ ಬಿಗಿಪಟ್ಟು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

Shorts Shorts