Home State Politics National More
STATE NEWS

Lokayukta Raid | ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಮರ! ರಾಜ್ಯದ 11 ಕಡೆ ಏಕಕಾಲಕ್ಕೆ ದಾಳಿ

ED
Posted By: Meghana Gowda
Updated on: Nov 25, 2025 | 4:15 AM

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ (Corruption) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಲೋಕಾಯುಕ್ತ ಪೊಲೀಸರು ಇಂದು  ರಾಜ್ಯದ 11 ವಿವಿಧ ಸ್ಥಳಗಳಲ್ಲಿ (11 different locations) ಏಕಕಾಲಕ್ಕೆ ದಾಳಿ ನಡೆಸಿ, ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಲೋಕಾಯುಕ್ತ (Lokayukta)ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳ ವಿವರ ಇಲ್ಲಿದೆ:

ಜಿಲ್ಲೆ ಅಧಿಕಾರಿ ಮತ್ತು ಹುದ್ದೆ ಇಲಾಖೆ/ಸಂಸ್ಥೆ
ಬೆಂಗಳೂರು ಕುಮಾರಸ್ವಾಮಿ RTO ಸೂಪರಿಂಟೆಂಡೆಂಟ್
ಮಂಡ್ಯ ಪುಟ್ಟಸ್ವಾಮಿ ನಗರ ಪಾಲಿಕೆ CAO
ಬೀದರ್ ಪ್ರೇಮ್ ಸಿಂಗ್ ಕೃಷ್ಣಾ ಮೇಲ್ದಂಡೆ ಯೋಜನೆ ಮು. ಇಂಜಿನಿಯರ್
ಮೈಸೂರು ರಾಮಸ್ವಾಮಿ ಸಿ. ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್‌ಪೆಕ್ಟರ್
ಧಾರವಾಡ ಸುಭಾಶ್ ಚಂದ್ರ ಕರ್ನಾಟಕ ವಿ.ವಿ. ಸಹಾಯಕ ಪ್ರಾಧ್ಯಾಪಕ
ಧಾರವಾಡ ಸತೀಶ್ ಪ್ರಾ. ಪಶು ಕ್ಲಿನಿಕ್, ಹುಲಿಗೋಲ್ ಹಿರಿಯ ಪರೀಕ್ಷಕ
ಶಿವಮೊಗ್ಗ ಲಕ್ಷ್ಮೀಪತಿ ಸಿ.ಎನ್ SIMS ಮೆಡಿಕಲ್ ಕಾಲೇಜ್ FDA
ದಾವಣಗೆರೆ ಪ್ರಭು ಜೆ. APMC ಸಹಾಯಕ ನಿರ್ದೇಶಕ
ಮೈಸೂರು (ಮಡಿಕೇರಿ) ಗಿರೀಶ್ ಡಿ.ಎಂ PWD, ಸಹಾಯಕ ಅಧೀಕ್ಷಕ ಇಂಜಿನಿಯರ್
ಹಾವೇರಿ ಶೇಕಪ್ಪ ಯೋಜನಾ ನಿರ್ದೇಶಕ ಕಚೇರಿ ಇಇ

ಅಕ್ರಮ ಆಸ್ತಿಗಳ ಸಂಪಾದನೆಗೆ ಸಂಬಂಧಿಸಿದಂತೆ ಈ ಅಧಿಕಾರಿಗಳ (officers)ವಿರುದ್ಧ ದೂರುಗಳು ದಾಖಲಾಗಿದ್ದವು. ದಾಳಿ ಮುಂದುವರಿದಿದ್ದು,  ಆಸ್ತಿ ವಿವರಗಳು ಪತ್ತೆಯಾಗುವ ಸಾಧ್ಯತೆ ಇದೆ.

Shorts Shorts