ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಇದೀಗ ‘ಖಾತೆ ಹಂಚಿಕೆ’ಯ ಕಗ್ಗಂಟು ಶುರುವಾಗಿದೆ. ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ 19 ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಯವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಬಲ ಹಾಗೂ ಆಕರ್ಷಕ ಖಾತೆಗಳನ್ನು ತಮ್ಮದಾಗಿಸಿಕೊಳ್ಳಲು ನೂತನ ಸಚಿವರು ತೀವ್ರ ಕಸರತ್ತು ಆರಂಭಿಸಿದ್ದಾರೆ.
ಸಿಎಂ ನಿವಾಸಕ್ಕೆ ಭೇಟಿ, ಭಾರಿ ಲಾಬಿ
ತಮಗೆ ಒಲಿದಿರುವ ಸಚಿವ ಸ್ಥಾನದ ಜೊತೆಗೆ ಪ್ರಮುಖ ಇಲಾಖೆಗಳ ಹೊಣೆಗಾರಿಕೆ ಹಾಗೂ ತಮ್ಮಿಷ್ಟದ ಜಿಲ್ಲೆಗಳ ಉಸ್ತುವಾರಿ ಪಡೆಯಲು ಸಚಿವರು ತೆರೆಮರೆಯ ಭಾರಿ ಲಾಬಿ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಸಚಿವರು ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ, ತಮಗೆ ಸೂಕ್ತವಾದ ಖಾತೆ ನೀಡುವಂತೆ ಒತ್ತಡ ಹೇರುತ್ತಿರುವ ಬೆಳವಣಿಗೆಗಳು ಕಂಡುಬಂದಿವೆ. ಯಾರಿಗೆ ಯಾವ ಇಲಾಖೆ ಒಲಿಯಲಿದೆ? ಯಾವ ಜಿಲ್ಲೆಯ ಉಸ್ತುವಾರಿ ಯಾರ ಹೆಗಲಿಗೆ ಏರಲಿದೆ? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ನೂತನ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ
ಮೂಲಗಳ ಪ್ರಕಾರ, ನೂತನ ಸಚಿವರಿಗೆ ಹಂಚಿಕೆಯಾಗಲಿರುವ ಸಂಭಾವ್ಯ ಖಾತೆಗಳ ವಿವರ ಈ ಕೆಳಗಿನಂತಿದೆ:
- ಪಿ.ಎಂ. ನರೇಂದ್ರಸ್ವಾಮಿ: ಸಮಾಜ ಕಲ್ಯಾಣ ಇಲಾಖೆ
- ಬಸವರಾಜ ರಾಯರೆಡ್ಡಿ: ಕಾನೂನು ಹಾಗೂ ಪ್ರವಾಸೋದ್ಯಮ
- ಎಸ್.ಎಸ್. ಮಲ್ಲಿಕಾರ್ಜುನ್: ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ
- ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಜಮೀರ್ ಅಹಮ್ಮದ್ ಖಾನ್: ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
- ಕೆ.ಎನ್. ಬಸವಂತಪ್ಪ: ಪೌರಾಡಳಿತ
- ವಿಜಯಾನಂದ ಕಾಶಪ್ಪನವರ್: ಕೈಮಗ್ಗ, ಜವಳಿ, ಕೃಷಿ ಮಾರುಕಟ್ಟೆ
- ಡಾ. ಅಜಯ್ ಸಿಂಗ್: ಸಣ್ಣ ಕೈಗಾರಿಕೆ
- ರುದ್ರಪ್ಪ ಲಮಾಣಿ: ಅಬಕಾರಿ ಇಲಾಖೆ
- ಹೆಚ್.ಸಿ. ಬಾಲಕೃಷ್ಣ: ಅರಣ್ಯ ಮತ್ತು ಪರಿಸರ
- ರಿಜ್ವಾನ್ ಅರ್ಷದ್: ಉನ್ನತ ಶಿಕ್ಷಣ ಇಲಾಖೆ
- ಪುಟ್ಟರಂಗಶೆಟ್ಟಿ: ಪಶುಸಂಗೋಪನೆ, ರೇಷ್ಮೆ
- ಬಿ. ನಾಗೇಂದ್ರ: ಮೀನುಗಾರಿಕೆ, ಬಂದರು
- ಸಂತೋಷ್ ಲಾಡ್: ಕಾರ್ಮಿಕ ಇಲಾಖೆ
- ಶಿವರಾಜ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
