S Shorts

ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದು ರೈತರ ಸೋಗಿನ ಕಿಡಿಗೇಡಿಗಳು : ADGP ಹಿತೇಂದ್ರ ಹೇಳಿಕೆ!

ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದು ರೈತರ ಸೋಗಿನ ಕಿಡಿಗೇಡಿಗಳು : ADGP ಹಿತೇಂದ್ರ ಹೇಳಿಕೆ!
Author: Meghana Gowda
Posted By: Meghana Gowda
Updated: Nov 14, 2025 | 7:37 AM

ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ (Tractors) ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ (ADGP) ಆರ್. ಹಿತೇಂದ್ರ (R. Hithrendra) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಹಿತೇಂದ್ರ ಅವರು, ಈ ಘಟನೆ ರೈತರ ಕೃತ್ಯವಲ್ಲ, ಬದಲಾಗಿ ಇದು ಕಿಡಿಗೇಡಿಗಳ ಪೂರ್ವನಿಯೋಜಿತ ((Pre-Planned) ಕೃತ್ಯ.  ರೈತರ ಸೋಗಿನಲ್ಲಿ ಕೆಲವರು ಬಂದು   ಪೆಟ್ರೋಲ್ ಸುರಿದು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ  ಎಂದು ಸ್ಪಷ್ಟಪಡಿಸಿದರು.

ಪೆಟ್ರೋಲ್ ಸುರಿದು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ನಿಜವಾದ ಆರೋಪಿಗಳನ್ನು ನಾವು ಶೀಘ್ರದಲ್ಲೇ ಬಂಧಿಸುತ್ತೇವೆ. ಈಗಾಗಲೇ 15 ಮಂದಿ (15 people ) ಯನ್ನು ಶಂಕಿಸಿ ತನಿಖೆ ಆರಂಭವಾಗಿದೆ.  ಗಲಭೆ ನಿಯಂತ್ರಣದ ಸಂದರ್ಭದಲ್ಲಿ ಗಾಯಗೊಂಡಿದ್ದ ಎಎಸ್ಪಿ ಮಹಾಂತೇಶ್ವರ ಜಿದ್ದಿ (ASP Mahanteshwar Jiddi) ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ಹೇಳಿದರು.